Schemes

ಏಪ್ರಿಲ್‌ 1 ರಿಂದ ದುಡಿಯುವ ಮಹಿಳೆಯರಿಗೆ Free ಬಸ್‌ ಪಾಸ್‌ ಆರಂಭ ಸಿಎಂ ಬೊಮ್ಮಾಯಿಯವರ ಮಹತ್ತರ ಘೋಷಣೆ

Published

on

ಹಲೋ ಸ್ನೇಹಿತರೆ ರಾಜ್ಯದಲ್ಲಿನ ದುಡಿಯುವ ಹೆಣ್ಣು ಮಕ್ಕಳಿಗೆ ಬಜೆಟ್‌ನಲ್ಲಿ ಘೋಷಿಸಿದಂತೆ ಏಪ್ರಿಲ್‌ 1 ರಿಂದಲೇ ಉಚಿತ ಬಸ್‌ ಪಾಸ್‌ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸಿಎಂ ಬಸವರಾಜ ಬೊಮ್ಮಯಿ ಸೂಚಿಸಿದರು. ವಿಧಾನಸೌಧದ ಮುಂಭಾಗ KSRTC ವೋಲ್ವೊ ಮಲ್ಟಿಆಕ್ಸೆಲ್‌ನ ಅಂಬಾರಿ ಉತ್ಸವ ಸ್ಲೀಪರ್‌ ಬಸ್ ಗಳಿಗೆ ಮಂಗಳವಾರ ಚಾಲನೆ ನೀಡಿ.” ಸಾರಿಗೆ ನಿಯಮಗಳು ಮಿನಿ ಶಾಲಾ ಬಸ್ ಗಳನ್ನು ಪರಿಚಯಿಸಿರಬೇಕು. ನಿಲ್ಲಿಸಿರುವ ಬಸ್‌ ಗಳನ್ನು ಕಾರ್ಯಚರಣೆಗೊಳಿಸಬೇಕು. ಶಾಲೆಗಳ ಆರಂಭದಲ್ಲೇ ಪ್ರತೀ ತಾಲೂಕಿನಲ್ಲಿ ಕನಿಷ್ಟ 5 ಬಸ್‌ ಗಳನ್ನು ಆಚರಣೆ ಮಾಡಬೇಕು”, ಎಂದರು.

Karnataka Govt Free Bus Pass Scheme 2023
Karnataka Govt Free Bus Pass Scheme 2023 In Kannada
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಸಾರಿಗೆ ನೌಕರರ ಐದಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಈಗ ವೇತನ ಪರಿಷ್ಕರಣೆಗೆ ಪ್ರಸ್ತಾವಣೆ ಸಲ್ಲಿಸಿದ್ದು, ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಯೋಜನೆಯ ಉಪಯೋಗ:

ತಾವು ಕೆಂಪು ಬಸ್‌ ಗಳಲ್ಲಿ ಕಾಲೇಜಿಗೆ ಹೋಗುತ್ತಿದ್ದುದನ್ನು ಸ್ಮರಿಸಿದ ಸಿಎಂ, ” ಆಗ ಚಾಲಕರು ಹಾಗೂ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯವಿತ್ತು, ಗ್ರಾಮೀಣರು KSRTC ಬಸ್‌ ಗಳ ಮೂಲಕವೇ ಗುರುತಿಸಿಕೊಳ್ಳುತ್ತಿದ್ದರು. ಖಾಸಗಿಯವರು ಲಾಭದಾಯಕ ಮಾರ್ಗಗಳಲ್ಲಷ್ಟೇ ಬಸ್‌ ಗಳನ್ನು ಓಡಿಸುತ್ತಾರೆ. ಸಾರಿಗೆ ನಿಗಮಗಳು ಜನರ ಸೇವೆಗಾಗಿ ಕೆಲಸ ಮಾಡುತ್ತಿವೆ. ಸೇವಾ ವಲಯ ಹಾಗೂ ವಾಣಿಜ್ಯ ವಲಯಗಳಲ್ಲೂ ಸಂಚರಿಸಿ ನಿಗಮವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು,” ಎಂದು ತಿಳಿಸಿದರು.

ಇದನ್ನೂ ಸಹ ಓದಿ : ರೈತರಿಗೆ ಹಸು & ಎಮ್ಮೆ ಖರೀದಿ, ಸರ್ಕಾರದಿಂದ 1.6 ಲಕ್ಷ ರೂ. ಸಹಾಯಧನ, ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ಉಚಿತ ಬಸ್‌ ಪಾಸ್‌ ನೀಡುವ ಯೋಜನೆ:

KSRTC ತನ್ನ ಸ್ವಂತ ಶಕ್ತಿಯಿಂದ ಕಾರ್ಯಚರಣೆಗೊಳ್ಳಬೇಕು. ಕೋವಿಡ್‌ ಸಂದರ್ಭದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಈ ವೇಳೆ ಸರಕಾರ ಅಗತ್ಯ ಹಣಕಾಸಿನ ಬೆಂಬಲ ನೀಡಿದೆ. ಎರಡು ವರ್ಷಗಳ ಕಾಲ ನೌಕರರ ವೇತನ ಮತ್ತು ಡೀಸೆಲ್‌ ಗೆ ಅನುದಾನ ನೀಡಲಾಯಿತು. ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ 46000 ಕೋಟಿ ರೂ ನೀಡಲಾಗಿದೆ. ಇತ್ತೀಚಿಗೆ 1000 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ತೆರಿಗೆ ವಿನಾಯಿತಿ ನೀಡಲು ಸಹ ತಯಾರಿದೆ. ನಿಗಮಗಳು ವಾಣಿಜ್ಯ ಮಾರ್ಗದಲ್ಲಿ ಬಸ್‌ ಗಳನ್ನು ಓಡಿಸಬೇಕು. ಸೋರಿಕೆ ತಡೆಯುವ ಮೂಲಕ ಆದಾಯ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು,” ಎಂದು ತಾಕೀತು ಮಾಡಿದರು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

KSRTC ಅಧ್ಯಕ್ಷ ಚಂದ್ರಪ್ಪ ಮಾತನಾಡಿ ” ನಿಗಮದಿಂದ 50 ಅಂಬಾರಿ ಬಸ್‌ ಗಳನ್ನು ಖರೀದಿಸಲಾಗಿದೆ. ಈಗ 20 ಬಸ್ ಗಳು ನಿಗಮ ಸೇರಿವೆ. ಮಾರ್ಚ್‌ಗೆ 20 ಬಸ್‌ ಗಳು ಬರಲಿವೆ,”ಎಂದರು. ಕಂದಾಯ ಸಚಿವ ಆರ್.‌ ಅಶೋಕ್‌, KSRTC ಉಪಾಧ್ಯಕ್ಷ ಮೋಹನ್‌ ಮೆಣಸಿನ ಕಾಯಿ, ಶಾಸಕರಾದ ಸೋಮಶೇಖರ ರೆಡ್ಡಿ, ಸತೀಶ್‌ ರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಎಂ ನಾಗರಾಜ್‌, ನಿವೃತ್ತ IAS ಅಧಿಕಾರಿ ಎಂ. ಆರ್‌ ಶ್ರೀನಿವಾಸಮೂರ್ತಿ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಉಪಸ್ಥಿತರಿದ್ದರು.

ಇತರೆ ವಿಷಯಗಳು:

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕೃಷಿ ಅಧ್ಯಯನಕ್ಕೆ 40 ಸಾವಿರ ಉಚಿತ ಸಹಾಯಧನ ಸಿಗಲಿದೆ

ತಂತಿ ಬೇಲಿ ಯೋಜನೆ 2023: ರೈತರಿಗೆ ಒಳ್ಳೆಯ ಸುದ್ದಿ, ತಂತಿ ಬೇಲಿಗಾಗಿ ಸರ್ಕಾರ 200 ಕೋಟಿ ರೂಪಾಯಿ ಖರ್ಚು ಮಾಡುತ್ತದೆ

ರಸಗೋಬ್ಬರ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ನೇರ ನಿಮ್ಮ ಖಾತೆಗೆ, 2183 ರೂ. ಉಚಿತ ಎಲ್ಲ ರೈತರಿಗೆ ಸಿಗಲಿದೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ